ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಡಿಸೆಂಬರ್ 21, 2010

‘ಮಹಾಭಾರತ’ ಮತ್ತು ‘ಹದಿನೆಂಟು’ (Numerology) ಭಾಗ ೨

                          ಮಹಾಭಾರತದಲ್ಲಿ ಹದಿನೆಂಟು ಪರ್ವಗಳು, ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡದ್ದು ಹದಿನೆಂಟು ಆಕ್ಷೋಹಿನಿ ಸೇನೆ, ಮಾಹಾಭಾರತ ಯುದ್ಧ ನಡೆದದ್ದು ಹದಿನೆಂಟು ದಿವಸ, ಮಹಾಭಾರತದ ಸಾರಭೂತವಾದ ಭಗವದ್ಗೀತೆಯಲ್ಲಿರುವುದು ಹದಿನೆಂಟು ಅಧ್ಯಾಯ, ಹದಿನೆಂಟು ಪುರಾಣಗಳು, ಹಂಸಗಾಯತ್ರಿಯಲ್ಲಿ ಹದಿನೆಂಟು ಶಬ್ಧಗಳು, ಯಜುರ್ವೇದ ಪುರುಷಸೂಕ್ತದಲ್ಲಿ ಹದಿನೆಂಟು ಮಂತ್ರಗಳು, ಈಶಾವಾಸ್ಯ ಉಪನಿಷತ್ತಿನಲ್ಲಿ ಹದಿನೆಂಟು ಮಂತ್ರಗಳು, ಹದಿನೆಂಟು ಅಷ್ಟಾದಶ ಸ್ಮೃತಿಗಳು, ಹದಿನೆಂಟು ಅಷ್ಟಾದಶ ಪುರಾಣಗಳು, ಪುರಾಣ ಶ್ರೇಷ್ಟವಾದ ಭಾಗವತದಲ್ಲಿ ಹದಿನೆಂಟು ಸಾವಿರ ಶ್ಲೋಕಗಳು,- ಅಂದರೆ ಹದಿನೆಂಟು ಎಂಬುದು its not a coinsidel.  ಇದು ಬುದ್ದಿಪೂರ್ವಕವಾಗಿ ಮಾಡಿದ್ದು ಭಗವಂತ. that means ‘18’ has a spritual meaning.ಅದು ಯಾವುದು ಅಂತ ತಿಳಿಸುವುದೇ ಮಹಾಭಾರತ. ಏಳು ಮತ್ತು ಹದಿನೆಂಟು ಮಹಾಭಾರತದ ಸಂಖ್ಯೆ. ಈ ಏಳು ಏನು ಅಂದ್ರ್, ನಾವು ಮಹಾಭಾರತದಿಂದ ಕಲಿಯಬೇಕಾದ ಮಾನವೀಯ ಮೌಲ್ಯಗಳನ್ನು ನಮಗೆ ಪ್ರತಿನಿಧಿಸತಕ್ಕಂತಹ ಪಾತ್ರಗಳು charactors ಏಳು. ಪಂಚಪಾಂಡವರು , ದ್ರೌಪದಿ ಮತ್ತು ಕೃಷ್ಣ. ಇವರು ಪ್ರತಿನಿಧಿಸವ ಮೌಲ್ಯಗಳು ಹದಿನೆಂಟು. ಅದೇ ನಾವು ಜೀವನದಲ್ಲಿ ರೂಢಿಸಿಕೊಳ್ಳಬೇಕಾದ ಜೀವನ ಮೌಲ್ಯಗಳು, ಅದೇ 'ಮನು'.  ಅದು ಯಾವುದೆಲ್ಲ ನೋಡೋಣ..
                   ಧರ್ಮರಾಜ 'ಧರ್ಮದ' ಪ್ರತಿನಿಧಿ. ನಮ್ಮ ಜೀವನದಲ್ಲಿ ಧರ್ಮವನ್ನ ಹೇಗೆ ರೂಡಿಸಿಕೊಳ್ಳಬೇಕು, ಅಳವಡಿಸಿಕೊಳ್ಳಬೇಕು? ಎಂಬುದನ್ನ ತಿಳಿಸಿಕೊಡುತ್ತದೆ 'ಧರ್ಮರಾಜ' ಎಂಬ charactor. ಭೀಮಸೇನ ಹತ್ತು  ಜೀವನ ಮೌಲ್ಯಗಳನ್ನು ಪ್ರತಿನಿಧಿಸುತ್ತಾನೆ. "ಭಕ್ತಿಹಿ, ಜ್ಞಾನ೦ಚ, ವೈರಾಗ್ಯಂ, ಪ್ರಜ್ಞಾ, ಮೇಧಾ, ಧೃತಿಹಿ, ಸ್ಥಿಥಿಹಿ, ಯೋಗಹ, ಪ್ರಾಣಾಹ, ಬಲಂಚ" . ಅಂದರೆ ಈ ಹತ್ತು ಮೌಲ್ಯಗಳು ಲೌಕಿಕವಾಗಿಯೂ ಬೇಕು, ಆಧ್ಯಾತ್ಮಿಕವಾಗಿಯೂ ಬೇಕು. ಹಿಂದಿನ ಕಾಲದಲ್ಲಿ ಈ 'ಜ್ಞಾನ ಭಕ್ತಿ ವೈರಾಗ್ಯಕ್ಕೆ' ಬಹಳ ಪ್ರಾಮುಖ್ಯತೆ ಕೊಡುತ್ತಿದ್ದರು ಪ್ರ್ರಚೀನರು. ಯಾವುದಾದರೊಂದು ಹೋಮ ಹವನ ಮಾಡುವಾಗ ಸಂಕಲ್ಪದಲ್ಲಿ  ಜ್ಞಾನ ಭಕ್ತಿ ವೈರಾಗ್ಯ ಸಿದ್ದರ್ತ್ಹ್ಯಂ ಅಂತ ಸೇರಿಸುತ್ತಿದ್ದರು. ಅಂದರೆ ಜೀವನದಲ್ಲಿ ಈ ಮೂರನ್ನು ಪಡೆಯಲೇ ಬೇಕೆಂದು  ಬಹಳ ಆಸೆ ಪಡುತ್ತಿದ್ದರು ಪ್ರಾಚೀನರು. ಇದಾದ ಮೇಲೆ ನಾಲ್ಕನೇ ಗುಣ 'ಪ್ರಜ್ಞಾ'. ಪ್ರಜ್ಞೆ ಅಂದರೆ ಯಾವ ಸಂಧರ್ಭದಲ್ಲಿ ಹೇಗೆ ಸ್ಪಂದಿಸಬೇಕು ಅನ್ನುವ ವಿವೇಕ. ಜ್ಞಾನವಿದ್ದವರಿಗೆಲ್ಲ ಪ್ರಜ್ಞೆ ಇರಬೇಕಂತಿಲ್ಲ. ಕೆಲವರು bookish knowledge.ಬರೀ ಪುಸ್ತಕದ ಬದನೇಕಾಯಿ. ಅಂಥವರಿಗೆ ಜ್ಞಾನವಿರುತ್ತದೆ ಪ್ರಜ್ಞೆ ಇರುವುದಿಲ್ಲ. it is a different qualitiy. ಪ್ರಜ್ಞೆ ಗೆ ಕೋಶಕವಾಗಿ 'ಮೇಧಾ' ಇರಬೇಕು, ಮೇಧಾ ಅಂದ್ರೆ memory, ಸ್ಮರಣ ಶಕ್ತಿ. ನಾವು ಯಾವುದಾದರೊಂದು ಗ್ರಂಥವನ್ನು ಓದಿದಾಗ ಅದನ್ನ ನಾವು 'ಆಥ್ಮಸಾಥ್' ಮಾಡುವುದು ಅಂದರೇನು? ಅದನ್ನ ನೆನಪಿಟ್ಟು ಕೊಳ್ಳುವುದು. ಅಂದರೆ ಪುಸ್ತಕದಲ್ಲಿದ್ದದ್ದು ನಮ್ಮ ಮಸ್ತಕಕ್ಕೆ ಬಂದು ಸೇರಿಕೊಂಡಾಗಲೇ ಅದು ನಮ್ಮದಾಯಿತು. ಯಾವತ್ತು ನಾವು ಬರೆಯಲಿಕ್ಕೆ ಪ್ರಾರಂಬಿಸಿದೇವೆಯೋ ಅಂದಿನಿಂದ ನಮ್ಮ್ ಅಸ್ಮರಣ ಶಕ್ತಿ ಕಡಿಮೆ ಯಾಯ್ತು. ಅದನ್ನ ನೆನಪಿಡುವ ಶಕ್ತೀಯೇ ಮೇಧಾ. ಪುಸ್ಥಕದಲ್ಲಿದ್ದದು ನಿನ್ನದಲ್ಲ, ನೀನು ಏನನ್ನ ನೆನಪಿಟ್ಟುಕೊಂಡಿದ್ದಿಯಾ ಅದು ಮಾತ್ರ ನಿನ್ನದು. ಇದು ಜೀವನದಲ್ಲಿ ಇರಬೇಕಾದಂತಹ  ಮುಖ್ಯ ಸಂಗತಿ. ಹಿಂದಿನ ಕಾಲದಲ್ಲಿ ಯಾರೂ ಗ್ರಂಥ ಬರೆಯುತ್ತಿರಲಿಲ್ಲ. only mental composition ಶ್ರುತಿ ಮತ್ತು ಸ್ಮೃತಿ,ಕೇಳುವುದು ಕೇಳಿದ್ದನ್ನ ನೆನಪಿಟ್ಟುಕೊಳ್ಳುವುದು. ಇವೆರಡರಲ್ಲಿಯೇ ನಡೆಯುತ್ತಿತ್ತು ಜ್ಞಾನ ಪರಂಪರೆ. ಯಾವತ್ತು ನಾವು ಬರೆಯಲಿಕ್ಕೆ ಪ್ರಾರಂಬಿಸಿದೇವೆಯೋ ಅಂದಿನಿಂದ ನಮ್ಮ ಸ್ಮರಣ ಶಕ್ತಿ ಕಡಿಮೆ ಯಾಯ್ತು. ಆದ್ದರಿಂದ ಮೊದಲು ಮೇಧಾ ಶಕ್ತಿಯನ್ ಬೆಳೆಸಿಕೊ. ನಂತರ ಧೃತಿಹಿ, ಸ್ಥಿಥಿಹಿ - ಧೃತಿ ಅಂದರೆ confidence. ಸ್ಥಿಥಿಹಿ ಅಂದರೆ ಸ್ಥಿರತೆ. ಮನುಷ್ಯನಿಗೆ ಜೀವನದಲ್ಲಿ ಏನಾದರೂ achive ಮಾಡಬೇಕಾದರೆ ಇದು ಎರಡು ಇರಲೇಬೇಕು ಅಂತಾರೆ ಪ್ರಾಚೀನರು. confidence ಇಲ್ಲದಿದ್ದರೆ ಯಾವುದೂ ಮಾಡಲಿಕ್ಕೆ ಆಗೋದಿಲ್ಲ, ಯಾರಿಗೆ ಸ್ಥಿರತೆ ಇಲ್ಲವೋ ಅವರಿಗೂ ಏನನ್ನು ಸಾದಿಸಲಿಕ್ಕೆ ಬರೋಲ್ಲ,. ಇಂದು ಹೆಚ್ಚಿನವರು ತಮ್ಮ ತಲೆಯಿಂದ ಯೋಚಿಸುವುದೇ ಇಲ್ಲ. ಯಾರ್‍ಯಾರ ತಲೆಯಿಂದಲೇ ಯೋಚಿಸುವುದು. ಯಾರದ್ದೋ ಮಾತು ಕೇಳುವುದು ಅದು ಹೌದು ಅಂತಾಗುವುದು,  ಮರುದಿನ ಮತ್ಯಾರದ್ದೋ ಮಾತು ಕೇಳುವುದು ಆವಾಗ ಅದು ಹೌದು ಅಂತಾಗುವುದು. ಯಾರು ಏನು ಹೇಳಿದರೂ ಅದೇ ಸರಿ ಅಂತ ಅನಿಸುವುದು. ಅಂದರೆ ಸ್ವಂತ  ತಲೆಯನ್ನು ನಾವು ಬಳಸುವುದೇ ಮರೆತ್ಟಿದ್ದೇವೆ. ಸ್ಥಿಥಿಹಿ ಅಂದರೆ - ಎಲ್ಲವನ್ನೂ ಕೇಳು, ಅದನ್ನ ಸರಿದೂಗಿಸಿ ಯಾವುದು ಸರಿ ಯಾವುದು ತಪ್ಪುಅಂತ ತೀರ್ಮಾನಿಸಿ ಜೀವನದ ದಾರಿಯಲ್ಲಿ ಮುನ್ನಡೆ, ಅಂತ ಹೇಳುತ್ತಾನೆ ಭೀಮ. 
              ಆಮೇಲೆ 'ಯೋಗಹ,ಪ್ರಾಣಾಹ,ಬಲಮ್'.  ಯೋಗ೦ ಅಂದ್ರೆ  ಕೃಷ್ಣ ಗೀತೆಯಲ್ಲಿ ಹೇಳ್ತಾನೇ " ಸಮತ್ವಂ ಯೋಗ ಮುಚ್ಯತೆ"  ಜೀವನದಲ್ಲಿ ಸುಖ ಬರುತ್ತೆ, ದುಖ ಬರುತ್ತೆ. ಸೋಲು ಬರತ್ತೆ, ಗೆಲುವು ಬರತ್ತೆ, ಲಾಭ ಬರತ್ತೆ, ನಷ್ಟ ಬರತ್ತೆ,  ಕೇವಲ ಒಂದು ಮಾತ್ರ ಯಾರ ಜೀವನದಲ್ಲಿಯೂ ಇಲ್ಲ. ಇದು ಎರಡಾಗಿಯೇ ಇರುವುದು. ಒಂದಿದ್ದದ್ದರೆ ಇನ್ನೊನ್ದಿದೆ. ಅದು ಅನಿವಾರ್ಯ ಅಂತ ತಿಳಿದು ಎರಡನ್ನೂ ಸಮಾತೂಕವಾಗಿ , ಸುಖ ಬಂದಾಗ balance ತಪ್ಪಿ ಹಾರಡಬೇಡ , ದುಖ ಬಂದಾಗ ಕುಸಿಯಬೇಡ, ಯಾಕೆಂದರೆ ಸುಖ ಬೇಕು ಅಂತ ಆಸೆ ಇದೆಯಲ್ವಾ ನಿನಗೆ,  ಸುಖ ಬೇಕು ಅಂದ್ರೆ ದುಖ ಅದರ ಜೊತೆಗೆ ಇದೆ ಎಂದು ನೆನಪಿರಲಿ. ಯಾರಿಗೂ ಜೀವನದಲ್ಲಿ ಕೇವಲ ಸುಖ ಅಂತ ಇರಲ್ಲ, ಕೇವಲ ದುಖ ಅಂತ ಇರಲ್ಲ. ಅದು ಎಷ್ಟೇ ಶ್ರೀಮಂತನಾದರೂ, ಎಷ್ಟೇ ಬಡವನಾದರೂ ಸರಿ, ಜೀವನ ಅಂದ್ರೆ ದ್ವಂದ್ವ, ಹಗಲಾದ ಕೂಡಲೇ ನಾವು ಹಾರಡಲ್ಲ, ಕತ್ತಲಾದಾಗ ದುಖಪಡಲ್ಲ, ಹಾರಾಡಿದ್ರೂ ದುಖಪಟ್ಟರೂ ಹಗಲಾಗುತ್ತೆ, ಕತ್ತಲಾಗುತ್ತೆ. ಕತ್ತಲಾಯಿತು ಅಂದ್ರೆ ಬೆಳಕಾಗುತ್ತೆ ಅನ್ನೋ ಭರವಸೆ, ಬೆಳಗಾಯಿತು ಅಂದ್ರೆ ಕಾತ್ತಾಲಾಗುತ್ತೆ ಅನ್ನೋ ಒಂದು warning. ಆದ್ದರಿಂದ ಸುಖ ಬಂದಾಗ what is next change ದುಖ. so ಈ ಎಚ್ಚರವಿರಲಿ. ಎಲ್ಲವನ್ನೂ ಸಮದೃಷ್ಟಿ೦ದ ನೋಡುವ ರೀತಿಯೇ ಯೋಗ. ಆಮೇಲೆ ಪ್ರಾಣ ಮತ್ತು ಬಲ. ಪ್ರಾಣ ಅಂದರೆ- ನಮ್ಮ ದೇಹದಲ್ಲಿ ಒಂದು ಅಸಾಧಾರಣ ಶಕ್ತಿಯಿದೆ. ಅದು ಇರುವುದರಿಂದಲೇ ನಾವು ಬದುಕಿರುವುದು. ಆ ಪ್ರಾಣ ಶಕ್ತಿ ನಿರಂತರವಾಗಿ ನಮ್ಮ ಅಂಗೈ ಮೂಲಕ ಹೊರಗೆ ಹೋಗುತ್ತಿರುತ್ತದೆ, ಆದ್ದರಿಂದಲೇ ಅಂಗೈಯಲ್ಲಿ ರೋಮಗಳು ಬೆಳೆಯುವುದಿಲ್ಲ. ಅದನ್ನೇ touch heel ಅನ್ನುವುದು.ಬಲ ಅಂದ್ರೆ ಆತ್ಮಬಲ -ಆತ್ಮನ ಯೋಗ್ಯತೆ. ಒಬ್ಬನಿಗೆ ಏನು ಇದ್ದರೂ ಕೂಡ ಯೋಗ್ಯತೆ ಅಥವಾ ಅರ್ಹತೆ ಇಲ್ಲದಿದ್ದರೆ ಏನನ್ನೂ ಪಡೆಯಲಿಕ್ಕೆ ಆಗೋಲ್ಲ. ಏನು ಪ್ರಯತ್ನ ಮಾಡಿದರೂ ಅವನು ಯಶಸ್ವಿಯಾಗೊಲ್ಲ. ಜೀವನ ಯೋಗ್ಯತೆ ಬೇಕು. " ನಾಯ ಅಥ್ಮಬಲಹೀನ ಲಬ್ಯಹ" ಅಂತಾರೆ ಆಚಾರ್ಯ ಮಧ್ವರು ಬಲವಿಲ್ಲದವನಿಗೆ ಭಗವಂತನ ಅರಿವು ದೊರೆಯುವುದಿಲ್ಲ ಅಂದ್ರು , ಇದೆ ಬಲ ಅಂದ್ರೆ ಆಥ್ಮಬಲ. ಎಂಥಾ ಕಷ್ಟ ಬಂದರೂ ಈ ದಾರಿಯನ್ನು ಬಿಡಲಾರೆ ಅನ್ನುವ ಛಲ. "ಯೋಗ್ಯತಾಯ ಸ್ವಭಾವಚ, ಯೋಗ್ಯತಾಯ ಹಟಸ್ಚ". ಏನನ್ನಾದರೂ ಮಾಡಿಯೇ ಸಿದ್ಧ. ಅಂತಹ ಗುಣಗಳು ಎಲ್ಲರಲ್ಲಿಯೂ ಇರಬೇಕು ಅಂತಾನೆ ಭೀಮ. ಇಲ್ಲಿಗೆ 11 ಗುಣಗಳಾದವು. ಇದರಲ್ಲಿ ಜ್ಞಾನ ಭಕ್ತಿ ವೈರಾಗ್ಯ ಇವು ಮೂರನ್ನು ನಾವು ಸ್ವಲ್ಪ ಹೆಚ್ಚು ತಿಳಿದುಕೊಳ್ಳಬೇಕಾಗುತ್ತೆ. ವಾಸ್ತವಿಕವಾಗಿ ಈ ಜ್ಞಾನ ಭಕ್ತಿ ವೈರಾಗ್ಯ ಎಂಬುದು ಒಟ್ಟಿಗೆ ಇರತಕ್ಕಂತಹು. ಜ್ಞಾನ ಒಂದು ಹಕ್ಕಿಯಾದರೆ ಭಕ್ತಿ ವೈರಾಗ್ಯ ಎಂಬುದು ಅದರ ರೆಕ್ಕೆಗಳು. ಭಕ್ತಿ ವೈರಾಗ್ಯ ಇಲ್ಲದ ಜ್ಞಾನ ಅನ್ನುವುದಕ್ಕೆ  ಅರ್ಥವೇ ಇಲ್ಲ. ಒಂದು ವಸ್ತುವಂನ ನಾವು ಹೆಚ್ಚು ಹೆಚ್ಚು ತಿಳಿದುಕೊಂಡಾಗ ಆ ವಸ್ತುವಿನ ಬಗ್ಗೆ ನಮಗೆ ಗೌರವ ಬರುತ್ತೆ, ಪ್ರೀತಿ ಬೆಳೆಯುತ್ತದೆ. ಅದುವೇ ಭಕ್ತಿ. ಆ ವಸ್ತುವಿನ ಮೇಲೆ ಪ್ರೇತಿ ಬೆಳೆದಾಗ ಆ ವಸ್ತುವಿಗಿಂತ infeerior ಆದ ಆದ ವಸ್ತುವಿನ ಬಗ್ಗೆ, ಅದರ  limitation ಗೊತ್ತಾದಾದಾಗ ಉಂಟಾಗುವುದೇ ವೈರಾಗ್ಯ. 
                  ಭಗವಂತನ ಕಡೆಗೆ  ನಮ್ಮ ಮನಸ್ಸು ಹೆಚ್ಚು ಹೆಚ್ಚು tune ಆದಾಗ ಭಗವಂತನ ಅರಿವಿನ ಮುಂದೆ  ಈ ಪ್ರಪಂಚ ಏನೂ ಅಲ್ಲ ಅಂತ ಅದರ limitation ಗೊತ್ತಾಗುತ್ತೆ. ವೈರಾಗ್ಯ ಅಂದರೆ ಎಲ್ಲವನ್ನೂ ಬಿಡುವುದಲ್ಲ, ಒಂದು ವಸ್ತುವಿನ limitation ತಿಳಿಯುವುದು. ಇವೆರಡೂ ಜ್ಞಾನದಿಂದಲೇ ಬರಲು ಸಾಧ್ಯ. ಆದ್ದರಿಂದ ನಮಗೆ ಯಾವಾಗ ಜ್ಞಾನ ಬಂತೋ, ಆವಾಗ ಆ ವಸ್ತುವಿನ ಮಹತ್ವ ಗೊತ್ತಾಯ್ತು. ಉಳಿದ್ದದ್ದಕ್ಕೆ ಮಹತ್ವ ಇಲ್ಲ ಅಂತ ಗೊತ್ತಾಯ್ತು. ಪ್ರಪಂಚದ ಬಗ್ಗೆ ಇದ್ದ attachment ಭಗವಂತನ ಕಡೆಗೆ ಬಂತು. ಇದುವೇ ಜ್ಞಾನ ಭಕ್ತಿ ವೈರಾಗ್ಯ.
ಮುಂದುವರಿಯುತ್ತದೆ...............

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ